ಸಿನಿಮಾದಂತ ಪ್ರಭಾವಿ ಮಾಧ್ಯಮವನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬಳಸಿ ಯುವಜನತೆಯ ಅಭಿರುಚಿಯನ್ನು ಮತ್ತಷ್ಟು ಕೆಳಕ್ಕೆ ತಳ್ಳುವ ಪ್ರಯತ್ನ ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ. ಒಂದು ಸಿನಿಮಾ ಅಂದರೆ ಬರೀ ಪಡ್ಡೆ ಹೈಕಳುಗಳನ್ನು ಸಿನಿಮಾ ಮಂದಿರಗಳಿಗೆ ಎಳೆತರುವ ಮತ್ತು ಹಣ ಗಳಿಸುವುದು ಅಂತಲೇ ಭಟ್ಟರು ತಿಳಿದಂತಿದೆ.
ನಮ್ಮ ಯೋಗರಾಜ್ ಭಟ್ಟರು ಸಾಹಿತ್ಯದ ಹೆಸರಲ್ಲಿ ಗುರುಗಳಿಗೆ, ಪೋಷಕರಿಗೆ ಅವಮಾನಕರ ಶಬ್ದಗಳನ್ನು ಬಳಸುತ್ತಿದ್ದಾರೆ. ಅವರ ಲೇಖನಿಯಿಂದ ಹೊಮ್ಮಿದ ಕೆಲವು ಪದಗಳು ಹೀಗಿವೆ, ಹೈಯಸ್ಟ್ ಮಾರ್ಕ್ಸ್ ಕೊಟ್ಟವನೇ ಲೂಸು, ನಮ್ಮಪ್ಪ ಪುಣ್ಯಾತ್ಮ ಅಂತ ಹೀಯಾಳಿಸುವುದು, ಇನ್ನೊಂದು ಹುಡುಗಿಯ ಫೋನ್ ನಂಬರ್ ಇಟ್ಕೊಂಡಿರು ಅಂತ ಹೇಳುವುದು, ಸಿನಿಮಾಗಳಿಂದ ಪ್ರೇರಿತರಾಗುವ ನಮ್ಮ ಯುವಕರು ಇಂತ ಉತ್ತೇಜಕ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಧೋಗತಿ. ಹಾಡಿನ ಕೊನೆಯಲ್ಲಾದರು ನೀತಿ ಬೋಧದ ಮಾತು ಬೇಡವೇ.? ಭಟ್ಟರ ಸಿನಿಮಾಗಳೆಂದರೆ ಕೇವಲ ಕಾಲೇಜು ಮತ್ತು ಪಡ್ಡೆ ಗುಂಪಿಗೆ ಮಾತ್ರ ಮೀಸಲು ಅನ್ನುವ ರೀತಿಯಲ್ಲಿ ಬಿಂಬಿತವಾಗುತ್ತಿವೆ. ಪೋಷಕರು, ಹಿರಿಯರಿಗೆ ಅಂತ ಭಟ್ಟರು ಏನು ಕೊಡುಗೆ ಕೊಡಬಲ್ಲರು? ಮನೋರಂಜನೆ ಅಂದರೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಮೀಸಲೇ,? ಭಟ್ಟರು ಇನ್ನಾದರು ಒಳ್ಳೆ ಸಿನಿಮಾಗಳನ್ನು ನಿರ್ದೇಶಿಸಲಿ.
- ರಾಜೇಂದ್ರ ಅ.ಹುನಗುಂದ, ಕೊಪ್ಪಳ.
No comments:
Post a Comment